school activity calander

x

Monday 29 September 2014

ನಮ್ಮ ನೆಚ್ಚಿನ ಅಧ್ಯಾಪಿಕೆ ನಯನ ಟೀಚರಿಗೆ ಕಣ್ಣೀರ ವಿದಾಯ


ನಾಲ್ಕು ತಿಂಗಳುಗಳಲ್ಲಿ ನಮ್ಮೆಲ್ಲರ ಮನಸನ್ನು ಗೆದ್ದು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರವು ನಮ್ಮ ನೆಚ್ಚಿನ ವಿಷಯವನ್ನಾಗಿ ಬದಲಾಯಿಸಿದ್ದ ಶಿಕ್ಷಕಿ,ಹತ್ತನೇ ತರಗತಿಯಲ್ಲಿ ನಾವು 22 ಮಂದಿ ಮಾರ್ಚಿನ ಪರೀಕ್ಷೆಗಾಗಿ ತಯಾರಾಗುತ್ತಿದ್ದು ನಮ್ಮಲ್ಲಿ 7 ಮಂದಿಗೆ ಮೂರು ವಿಷಯಗಳಲ್ಲಿ A+ ಲಭಿಸಲು ಕಾರಣರಾದ ನೀವು ಶಿಕ್ಷಕಿಯಾಗಿ ತಮ್ಮ ಸೇವಾ ಅವಧಿಯಲ್ಲಿ ಅಪಾರ ಶಿಷ್ಯಂದಿರ ಬಳಗ ಹೊಂದುವ ಮೂಲಕ ಸರ್ವ ಸಮುದಾಯಕ್ಕೂ ಉತ್ತಮ ಶಿಕ್ಷಕಿಯಾಗಿ ಸಮರ್ಪಕ ಜೀವನ ಸಾಗಿಸುತ್ತಿದ್ದೀರಿ



ನಮ್ಮೊಂದಿಗೆ ನಮ್ಮ ಮುಖ್ಯೋಪಾಧ್ಯಾಯರು ಧ್ವನಿಗೂಡಿಸುತ್ತಾ ನಮ್ಮ ಬೇಸರವು ನಮ್ಮ ನಯನ ಟೀಚರಿಗೆ ಲಭಿಸಿದ ಗೌರವ.ರಾಜಕಾರಣಿಯನ್ನು ಕೇವಲ ತಾತ್ಕಾಲಿಕ ಲಾಭಕ್ಕಾಗಿ ಸ್ವಲ್ಪ ಸಮಯದ ಮಟ್ಟಿಗೆ ಹೋಗಳಬಹುದು. ಆದರೆ ಅಧ್ಯಾಪಕ ಹಾಗೂ ಅಧ್ಯಾಪಕಿ ಶಿಷ್ಯಂದಿರ ಮೇಲೆ ಬೀರುವ ಪ್ರಭಾವ ಆಯುಷ್ಯ ಇರುವವರೆಗೂ ಉಳಿಯುತ್ತದೆ.
ವಿದ್ಯಾ ದಾನ ಮಾಡುತ್ತಾ ಶ್ರೇಷ್ಠ ಸೇವೆ ಮಾಡಿ ವಿದ್ಯಾರ್ಥಿಗಳ ಜೀವನಕ್ಕೆ ದೀವಟಿಗೆಯಾದ ತಮಗೆ ಎಲ್ಲವೂ ಉತ್ತಮವಾಗಲಿ. ಶಿಸ್ತು, ಸಂಯಮ, ಮೌಲ್ಯ, ಸೃಜನ ಶೀಲ ಅಧ್ಯಾಪಕಿಯಾಗಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಎಷ್ಟು ಸಂಭ್ರಮ ಸಿಗುತ್ತೆ ಅನ್ನೋದು ನಿನಗೆ ಗೊತ್ತಾಗುತ್ತೆ" ಮುಂದಿನ ದಿನಗಳಲ್ಲಿ.ಹೌದು....ಯಾವಾಗಲು ಅತ್ಯುತ್ತಮ ಆಲೋಚನೆಯನ್ನೇ ಮಾಡುತ್ತಾರೆ. ಜ್ಞಾನದ ಬಲದಿಂದ ಜೀವನ ಉತ್ತಮ ಪಡಿಸಿಕೊಳ್ಳಬಹುದು. ಜ್ಞಾನಕ್ಕಿಂತ ಮಿಗಿಲಾದದ್ದು ಯಾವು ದೂ ಇಲ್ಲ ಎಂದು ಅದನ್ನು ಗಳಿಸಲು ಪ್ರಯತ್ನಿಸಬೇಕು. ಮುಂದಿನ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಗಳಿಸಿ ನನಗೆ ಫೋನ್ ಮೂಲಕ ತಿಳಿಸಿದ್ದೀರಿ ಎಂತಾದರೆ ಅದುವೇ ನೀವು ನನಗೆ ನೀಡುವ ಉಡುಗರೆಯಾಗುವುದು ಎಂದು ನಮ್ಮನ್ನುದೇಶಿಸಿ ಅವರು ಮಾತನಾಡಿದರು.ಧರ್ಮ, ನೈತಿಕತೆ, ಒಳ್ಳೆಯ ಚಾರಿತ್ರ್ಯ, ಎಲ್ಲರೂ ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಹೃದಯ, ಮನ ಸ್ಸುಗಳು ಒಂದುಗೂಡಿಸುವ ಸೇತುವೆ ಗಳಾಬೇಕು. ಒಳ್ಳೆಯದರಲ್ಲಿ ನಂಬಿಕೆ ಇಡಬೇಕು. ಮಾತ್ಸರ್ಯ, ಅಪನಂಬಿಕೆಯಿಂದ ದೂರ ಇರಬೇಕು. ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ, ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ನೀವು ನಮ್ಮ ಚೈತನ್ಯ....ನೀವು ನೀಡಿದ ಸ್ಪೂರ್ತಿ ಸದಾ ನಮ್ಮೊಂದಿಗಿರುವುದು.





No comments:

Post a Comment

 
Blogger Templates